Thursday, May 30, 2019

ಸಪರಿವಾರ ಶ್ರೀ ಭವಾನಿಶಂಕರ ದೇವರ ಪ್ರತಿಷ್ಠಾಪನೆ, ಬ್ರಹ್ಮ ಕಲಶಾಭಿಷೇಕ

|| ಶ್ರೀ ಶಾರದಾ ಗುರುಭ್ಯೋನಮಃ ||

ಶ್ರೀಮತ್ಪರಮಹಂಸೇತ್ಯಾದ್ಯನೇಕ ಬಿರುದಾವಳೀ ವಿರಾಜಮಾನರಾದ ದಕ್ಷಿಣಾಮ್ನಾಯ ಶೃಂಗೇರಿ 
ಶ್ರೀ ಶಾರದಾ ಪೀಠಾಧೀಶ್ವರರಾದ ಅನಂತ ಶ್ರೀ ವಿಭೂಷಿತ ಪರಮ ಪೂಜ್ಯ ಜಗದ್ಗುರು 
ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ 
ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳವರು 
ನಮ್ಮ ಪ್ರಾರ್ಥನೆಯನ್ನಂಗೀಕರಿಸಿ
ಸ್ವಸ್ತಿ ಶ್ರೀ ವಿಕಾರಿನಾಮ ಸಂವತ್ಸರದ ಜ್ಯೇಷ್ಠ ಶುಕ್ಲ ದ್ವಾದಶೀ ಶುಕ್ರವಾರ ತಾ|| 14-06-2019ರಂದು ಶಂಕರಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಪರಿವಾರ ಶ್ರೀ ಭವಾನಿಶಂಕರ ದೇವಸ್ಥಾನದ ಬ್ರಹ್ಮಕಲಶಾಭಿಷೇಕ ಹಾಗೂ ಮಹಾಪೂಜೆಯನ್ನು ನೆರವೇರಿಸಿ ಭಕ್ತರನ್ನು ಅನುಗ್ರಹ ಮಾಡಲಿದ್ದಾರೆ. ಭಕ್ತ ಮಹಾಶಯರು ಈ ಮಂಗಳಮಯ ಪ್ರತಿಷ್ಠಾ ಮಹೋತ್ಸವದಲ್ಲಿ ತನು-ಮನ-ಧನದೊಂದಿಗೆ ಭಾಗವಹಿಸಿ ಶ್ರೀ ಭವಾನಿಶಂಕರ ಹಾಗೂ ಜಗದ್ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ಧಾರ್ಮಿಕ ಕಾರ್ಯಕ್ರಮಗಳು:

ತಾ|| 12-06-2019 ಬುಧವಾರ ಬೆಳಿಗ್ಗೆ 08-30ಕ್ಕೆ ಗುರುದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗುರು ಗಣೇಶ ಪೂಜೆ, ಪುಣ್ಯಾಹ ವಾಚನ, ಮಾತೃಕಾ ಪೂಜೆ, ಮಂಟಪ ಶುದ್ಧಿ, ಜಲಾಧಿವಾಸ, ಬಿಂಬ ಶುದ್ಧಿ ಇತ್ಯಾದಿ.

ಸಂಜೆ 6-00ಗಂಟೆಗೆ ರಾಕ್ಷೋಘ್ನ ಹೋಮ, ವಾಸ್ತು ಹೋಮ, ಪ್ರಾಸಾದ ಶುದ್ಧಿ, ವಾಸ್ತು ಬಲಿ.
-------------------------------------------------------------
ತಾ|| 13-06-2019 ಗುರುವಾರ ಬೆಳಿಗ್ಗೆ 08-30ಕ್ಕೆ ಕಲಶ ಪ್ರತಿಷ್ಠೆ, ಅಧಿವಾಸ ಹೋಮ.

ಸಂಜೆ 6-00ಗಂಟೆಗೆ ಕಲಾತತ್ವನ್ಯಾಸ, ಅಷ್ಟಾವಧಾನ ಪೂಜೆ.
 -------------------------------------------------------------
ತಾ|| 14-06-2019 ಶುಕ್ರವಾರ ಪ್ರಾತಃ 5-40ಕ್ಕೆ ವೃಷಭ ಲಗ್ನದಲ್ಲಿ ಪ್ರಾಣಪ್ರತಿಷ್ಟೆ, ಪ್ರತಿಷ್ಠಾಂಗ ಹೋಮ.
ಪ್ರಾತಃ 9-30ಕ್ಕೆ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳವರ ಆಗಮನ
ಪೂರ್ಣಕುಂಭದೊಂದಿಗೆ ಸ್ವಾಗತ, ಸಭಾ ಕಾರ್ಯಕ್ರಮದ ನಂತರ 11-00 ರಿಂದ 11-30ಕ್ಕೆ ಸಲ್ಲುವ ಸಿಂಹ ಲಗ್ನದಲ್ಲಿ ಬ್ರಹ್ಮ ಕಲಶಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆ.

ವಿ.ಸೂ : ಜಗದ್ಗುರು ಪಾದಾರವಿಂದಗಳಿಗೆ ಪಾದ ಪೂಜೆ, ಫಲಪುಷ್ಪ ಕಾಣಿಕೆ ಸಮರ್ಪಣೆ ಮಾಡಲು ಅವಕಾಶವಿರುತ್ತದೆ.

ದೇವಸ್ಥಾನದ ನಿರ್ಮಾಣ ಹಾಗೂ ಕಾರ್ಯಕ್ರಮಗಳಿಗೆ ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು
Bank: State Bank of IndiaBranch: Niluvagilu
ACCOUNT NAME :SRI BHAVANISHANKARA DEVASTANA JEERNODDAR
Account No: 64213722441IFSC: SBIN0041087

ವಿಳಾಸ:
ಶಂಕರಪುರ, ಶಾನುವಳ್ಳಿ ಅಂಚೆ, ಕೊಪ್ಪ ತಾಲ್ಲೂಕು
ಚಿಕ್ಕಮಗಳೂರು ಜಿಲ್ಲೆ - 577120, ಕರ್ನಾಟಕ
 


No comments:

Post a Comment